ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ಸರ್ಕಾರ ರಾಜ್ಯದ ಬಿಪಿಎಲ್ (BPL) ಮತ್ತು ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪೌಷ್ಠಿಕ ಆಹಾರವನ್ನು ಒದಗಿಸಲು ಪ್ರತಿಷ್ಠಿತ ಅನ್ನಭಾಗ್ಯ ಯೋಜನೆ ನಡೆಸುತ್ತಿದೆ ಇದು ನಿಮ್ಗೂ ಸಹ ತಿಳಿದಿರಬಹುದು.
ಇದೀಗ ಪ್ರಸ್ತುತ ಈ ಯೋಜನೆಯಡಿ, ಯುಗಾದಿ ಹಬ್ಬದ ಪ್ರಯುಕ್ತವಾಗಿ ಸರ್ಕಾರವು ಪಡಿತರದಾರರಿಗೆ ಹೆಚ್ಚುವರಿ ಅಕ್ಕಿ ವಿತರಣೆ ಮಾಡಲು ನಿರ್ಧರಿಸಿದೆ.

ಮಾರ್ಚ್ ತಿಂಗಳ ಪಡಿತರ ಅಕ್ಕಿ ವಿತರಣೆಯ ಮಾಹಿತಿ:
- ಫೆಬ್ರವರಿ ತಿಂಗಳಿನಲ್ಲಿ ಬಾಕಿ ಉಳಿದ 5 ಕೆ.ಜಿ. ಅಕ್ಕಿ
- ಮಾರ್ಚ್ ತಿಂಗಳ 10 ಕೆ.ಜಿ. ಅಕ್ಕಿ
- ಒಟ್ಟು 15 ಕೆ.ಜಿ. ಅಕ್ಕಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗಿದೆ.
- ಮಾರ್ಚ್ 31ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯ ಇರುತ್ತೆ ಇನ್ನುವರಿಗೂ ಪಡೆದುಕೊಳ್ಳದಿದ್ದವರು ಹೋಗಿ ಪಡೆದುಕೊಳ್ಳಬಹುದು.
ಫೆಬ್ರವರಿ ತಿಂಗಳ ಪಡಿತರ ಆಕ್ಕಿ ಏಕೆ ಬಾಕಿ ಉಳಿಯಿತು.?
ಫೆಬ್ರವರಿ ತಿಂಗಳಲ್ಲಿ ಸರ್ಕಾರ ಅಕ್ಕಿಯ ಬದಲಿಗೆ ನಗದು (DBT – Direct Benefit Transfer) ವರ್ಗಾವಣೆಗೆ ಯೋಜನೆ ರೂಪಿಸಿತ್ತು. ಆದರೆ ಕೆಲವೊಂದಿಷ್ಟು ತಾಂತ್ರಿಕ ಕಾರಣಗಳಿಂದಾಗಿ ಈ ಅಕ್ಕಿ ಬದಲು ಹಣ ಬ್ಯಾಂಕ್ ಖಾತೆಗೆ ಹಾಕಲಾಗಿಲ್ಲ.
ಈ ಒಂದು ಕಾರಣದಿಂದಾಗಿ ಈ ಬಾಕಿ ಉಳಿದ 5 ಕೆ.ಜಿ. ಅಕ್ಕಿಯನ್ನು ಮಾರ್ಚ್ ತಿಂಗಳ ಪಡಿತರ ವಿತರಣೆಯೊಂದಿಗೆ ಸೇರಿಸಿ 15kg ಅಕ್ಕಿಯನ್ನು ಒಟ್ಟಾರೆಯಾಗಿ ವಿತರಿಸಲು ನಿರ್ಧಾರಿಸಲಾಗಿದೆ.
ಪಡಿತರ ಅಕ್ಕಿ ವಿತರಣಾ ನಿಯಮಗಳು ಏನು ಹೇಳುತ್ತೆ.?
ಅಂತ್ಯೋದಯ ಪಡಿತರ ಚೀಟಿದಾರರಿಗೆ ಅಕ್ಕಿ (AAY):
- 1-3 ಸದಸ್ಯರ ಕುಟುಂಬ – 35 ಕೆ.ಜಿ. ಅಕ್ಕಿ
- 4 ಸದಸ್ಯರ ಕುಟುಂಬ – 45 ಕೆ.ಜಿ. ಅಕ್ಕಿ
- 5 ಸದಸ್ಯರ ಕುಟುಂಬ – 65 ಕೆ.ಜಿ. ಅಕ್ಕಿ
- 10 ಸದಸ್ಯರ ಕುಟುಂಬ – 165 ಕೆ.ಜಿ. ಅಕ್ಕಿ
ಬಿಪಿಎಲ್ (BPL) ಪಡಿತರ ಚೀಟಿದಾರರಿಗೆ ಅಕ್ಕಿ:
- ಮಾರ್ಚ್ ತಿಂಗಳಲ್ಲಿ ತಲಾ 15 ಕೆ.ಜಿ. ಅಕ್ಕಿ
- ಏಪ್ರಿಲ್ನಿಂದ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ ಸರ್ಕಾರದಿಂದ ಉಚಿತವಾಗಿ 5 ಕೆಜಿ ಅಕ್ಕಿ.
ಪಡಿತರ ವಿತರಣೆ ಮಾಡಲು ಇ-ಕೆವೈಸಿ (e-KYC) ಕಡ್ಡಾಯ:
ಹೌದು ಸರ್ಕಾರ ಪಡಿತರ ವಿತರಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ.
ಇ-ಕೆವೈಸಿ ಮಾಡಿಸಬೇಕಾದ ವಿಧಾನ:
- ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ.
- ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಮತ್ತು ಬೆರಳಚ್ಚು (Fingerprints) ನೀಡಬೇಕು.
- ಇದು ಸಂಪೂರ್ಣ ಉಚಿತ, ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
- ಅಥವಾ ರೇಷನ್ ಅಂಗಡಿಗಳಿಗೆ ಹೋಗಿ ಇ-ಕೆವೈಸಿ ಮಾಡಬೇಕೆಂದರೆ ಸಾಕು, ಅವರು ಮಾಡಿಕೊಡುತ್ತಾರೆ.
- ಅಥವಾ ಇ-ಕೆವೈಸಿ ಆಗಿದೆ ಅಥವಾ ಇಲ್ಲವೆ ಎಂದು ರೇಷನ್ ಅಂಗಡಿಗಳಲ್ಲಿ ನೀವು ಚೆಕ್ ಮಾಡಬಹುದು.
ಅಧಿಕೃತ ಮಾಹಿತಿಗಾಗಿ ಹೀಗೇ ಪರಿಶೀಲಿಸಿ ಇ-ಕೆವೈಸಿ ಹೇಗೆ ಚೆಕ್ ಮಾಡುವುದು..?
- ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್: karnataka.gov.in
- ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್: ahara.kar.nic.in
ಉಚಿತ 5 ಕೆಜಿ ಅಕ್ಕಿ ಪಡೆಬಹುದಾದ ಫಲಾನುಭವಿಗಳು ಯಾರ್ಯಾರು.?
ಈ ಪಡಿತರ ವಿತರಣಾ ಯೋಜನೆ ಎಲ್ಲಾ ಬಿಪಿಎಲ್ (BPL) ಮತ್ತು ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಲಭ್ಯವಿರುತ್ತೆ.
ಇ-ಕೆವೈಸಿ ಮಾಡಿಸದಿದ್ದರೆ ಉಚಿತ ಅಕ್ಕಿ ಸಿಗುತ್ತಾ.?
ಇಲ್ಲ, ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ವಿತರಣೆ ಅಂದರೆ ಉಚಿತ ಅಕ್ಕಿ ನೀಡಲು ಸಾಧ್ಯವಿರುವುದಿಲ್ಲ.ಹೀಗಾಗಿ ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ.
ಪಡಿತರ ಪಾವತಿ ಸಮಸ್ಯೆ ಎದುರಾದರೆ ತಪ್ಪದೇ ಈ ಕೆಲಸ ಮಾಡಿ:
ನೋಡಿ ಮೊದಲು ಪಡಿತರ ಪಾವತಿ ಸಮಸ್ಯೆ ಎಂದರೆ ತಿಳಿದುಕೊಳ್ಳಿ
- ಬಯೋಮೆಟ್ರಿಕ್ ಅಂದರೆ ಹೆಬ್ಬಟ್ಟು ಕೊಟ್ಟು ನೀವು ರೇಷನ್ ತರುತ್ತೀರಲ್ಲವೇ ಇಂತಹ ಸಂದರ್ಭದಲ್ಲಿ ತೊಂದರೆಯಾದಾಗ.
- ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಸರಿಯಾಗಿ ಆಗದೆ ಇದ್ದಾಗ.
ಈ ಮೇಲ್ಗಡೆ ತಿಳಿಸಿರುವ ಹಾಗೆ ಯಾವುದೇ ತೊಂದರೆ ಆಗಲಿ ಈ ಕೆಳಗಿನ ಅಧಿಕಾರಿಗಳನ್ನು ಅಥವಾ ದೂರವಣಿಗೆ ಕರೆ ಮಾಡಬಹುದು.
- ಅಹಾರ ಇಲಾಖೆ ಗ್ರೀವಾನ್ಸ್ ಸೆಲ್: 1967
- ಸ್ಥಳೀಯ ಪಡಿತರ ಕಚೇರಿಗೆ ಭೇಟಿ ನೀಡಿ