BPL ಕಾರ್ಡ್ ಹೊಂದಿರುವವರಿಗೆ ಯುಗಾದಿ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್.! ರಾಜ್ಯ ಸರ್ಕಾರದಿಂದ ವಿಶೇಷ ಪಡಿತರ ವಿತರಣಾ ಯೋಜನೆ!

ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ಸರ್ಕಾರ ರಾಜ್ಯದ ಬಿಪಿಎಲ್ (BPL) ಮತ್ತು ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪೌಷ್ಠಿಕ ಆಹಾರವನ್ನು ಒದಗಿಸಲು ಪ್ರತಿಷ್ಠಿತ ಅನ್ನಭಾಗ್ಯ ಯೋಜನೆ ನಡೆಸುತ್ತಿದೆ ಇದು ನಿಮ್ಗೂ ಸಹ ತಿಳಿದಿರಬಹುದು. 

ಇದೀಗ ಪ್ರಸ್ತುತ ಈ ಯೋಜನೆಯಡಿ, ಯುಗಾದಿ ಹಬ್ಬದ ಪ್ರಯುಕ್ತವಾಗಿ ಸರ್ಕಾರವು ಪಡಿತರದಾರರಿಗೆ ಹೆಚ್ಚುವರಿ ಅಕ್ಕಿ ವಿತರಣೆ ಮಾಡಲು ನಿರ್ಧರಿಸಿದೆ.

WhatsApp Group Join Now
Telegram Group Join Now
Bumper good news for Ugadi festival for BPL card holders
Bumper good news for Ugadi festival for BPL card holders

ಮಾರ್ಚ್ ತಿಂಗಳ ಪಡಿತರ ಅಕ್ಕಿ ವಿತರಣೆಯ ಮಾಹಿತಿ:

  • ಫೆಬ್ರವರಿ ತಿಂಗಳಿನಲ್ಲಿ ಬಾಕಿ ಉಳಿದ 5 ಕೆ.ಜಿ. ಅಕ್ಕಿ
  • ಮಾರ್ಚ್ ತಿಂಗಳ 10 ಕೆ.ಜಿ. ಅಕ್ಕಿ
  • ಒಟ್ಟು 15 ಕೆ.ಜಿ. ಅಕ್ಕಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗಿದೆ.
  • ಮಾರ್ಚ್ 31ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯ ಇರುತ್ತೆ ಇನ್ನುವರಿಗೂ ಪಡೆದುಕೊಳ್ಳದಿದ್ದವರು ಹೋಗಿ ಪಡೆದುಕೊಳ್ಳಬಹುದು.

ಫೆಬ್ರವರಿ ತಿಂಗಳ ಪಡಿತರ ಆಕ್ಕಿ ಏಕೆ ಬಾಕಿ ಉಳಿಯಿತು.?

ಫೆಬ್ರವರಿ ತಿಂಗಳಲ್ಲಿ ಸರ್ಕಾರ ಅಕ್ಕಿಯ ಬದಲಿಗೆ ನಗದು (DBT – Direct Benefit Transfer) ವರ್ಗಾವಣೆಗೆ ಯೋಜನೆ ರೂಪಿಸಿತ್ತು. ಆದರೆ ಕೆಲವೊಂದಿಷ್ಟು ತಾಂತ್ರಿಕ ಕಾರಣಗಳಿಂದಾಗಿ ಈ ಅಕ್ಕಿ ಬದಲು ಹಣ ಬ್ಯಾಂಕ್ ಖಾತೆಗೆ ಹಾಕಲಾಗಿಲ್ಲ. 

ಈ ಒಂದು ಕಾರಣದಿಂದಾಗಿ ಈ ಬಾಕಿ ಉಳಿದ 5 ಕೆ.ಜಿ. ಅಕ್ಕಿಯನ್ನು ಮಾರ್ಚ್ ತಿಂಗಳ ಪಡಿತರ ವಿತರಣೆಯೊಂದಿಗೆ ಸೇರಿಸಿ 15kg ಅಕ್ಕಿಯನ್ನು ಒಟ್ಟಾರೆಯಾಗಿ ವಿತರಿಸಲು ನಿರ್ಧಾರಿಸಲಾಗಿದೆ.

ಪಡಿತರ ಅಕ್ಕಿ ವಿತರಣಾ ನಿಯಮಗಳು ಏನು ಹೇಳುತ್ತೆ.?

ಅಂತ್ಯೋದಯ ಪಡಿತರ ಚೀಟಿದಾರರಿಗೆ ಅಕ್ಕಿ (AAY):

  • 1-3 ಸದಸ್ಯರ ಕುಟುಂಬ – 35 ಕೆ.ಜಿ. ಅಕ್ಕಿ
  • 4 ಸದಸ್ಯರ ಕುಟುಂಬ – 45 ಕೆ.ಜಿ. ಅಕ್ಕಿ
  • 5 ಸದಸ್ಯರ ಕುಟುಂಬ – 65 ಕೆ.ಜಿ. ಅಕ್ಕಿ
  • 10 ಸದಸ್ಯರ ಕುಟುಂಬ – 165 ಕೆ.ಜಿ. ಅಕ್ಕಿ

ಬಿಪಿಎಲ್ (BPL) ಪಡಿತರ ಚೀಟಿದಾರರಿಗೆ ಅಕ್ಕಿ:

  • ಮಾರ್ಚ್ ತಿಂಗಳಲ್ಲಿ ತಲಾ 15 ಕೆ.ಜಿ. ಅಕ್ಕಿ
  • ಏಪ್ರಿಲ್‌ನಿಂದ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ ಸರ್ಕಾರದಿಂದ ಉಚಿತವಾಗಿ 5 ಕೆಜಿ ಅಕ್ಕಿ.

ಪಡಿತರ ವಿತರಣೆ ಮಾಡಲು ಇ-ಕೆವೈಸಿ (e-KYC) ಕಡ್ಡಾಯ:

ಹೌದು ಸರ್ಕಾರ ಪಡಿತರ ವಿತರಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ.

ಇ-ಕೆವೈಸಿ ಮಾಡಿಸಬೇಕಾದ ವಿಧಾನ:

  1. ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ.
  2. ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಮತ್ತು ಬೆರಳಚ್ಚು (Fingerprints) ನೀಡಬೇಕು.
  3. ಇದು ಸಂಪೂರ್ಣ ಉಚಿತ, ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
  4. ಅಥವಾ ರೇಷನ್ ಅಂಗಡಿಗಳಿಗೆ ಹೋಗಿ ಇ-ಕೆವೈಸಿ ಮಾಡಬೇಕೆಂದರೆ ಸಾಕು, ಅವರು ಮಾಡಿಕೊಡುತ್ತಾರೆ.
  5. ಅಥವಾ ಇ-ಕೆವೈಸಿ ಆಗಿದೆ ಅಥವಾ ಇಲ್ಲವೆ ಎಂದು ರೇಷನ್ ಅಂಗಡಿಗಳಲ್ಲಿ ನೀವು ಚೆಕ್ ಮಾಡಬಹುದು.

ಅಧಿಕೃತ ಮಾಹಿತಿಗಾಗಿ ಹೀಗೇ ಪರಿಶೀಲಿಸಿ ಇ-ಕೆವೈಸಿ ಹೇಗೆ ಚೆಕ್ ಮಾಡುವುದು..?

  • ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್: karnataka.gov.in
  • ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್: ahara.kar.nic.in

ಉಚಿತ 5 ಕೆಜಿ ಅಕ್ಕಿ ಪಡೆಬಹುದಾದ ಫಲಾನುಭವಿಗಳು ಯಾರ್ಯಾರು.?

ಈ ಪಡಿತರ ವಿತರಣಾ ಯೋಜನೆ ಎಲ್ಲಾ ಬಿಪಿಎಲ್ (BPL) ಮತ್ತು ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಲಭ್ಯವಿರುತ್ತೆ.

ಇ-ಕೆವೈಸಿ ಮಾಡಿಸದಿದ್ದರೆ ಉಚಿತ ಅಕ್ಕಿ ಸಿಗುತ್ತಾ.?

ಇಲ್ಲ, ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ವಿತರಣೆ ಅಂದರೆ ಉಚಿತ ಅಕ್ಕಿ ನೀಡಲು ಸಾಧ್ಯವಿರುವುದಿಲ್ಲ.ಹೀಗಾಗಿ ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ.

ಪಡಿತರ ಪಾವತಿ ಸಮಸ್ಯೆ ಎದುರಾದರೆ ತಪ್ಪದೇ ಈ ಕೆಲಸ ಮಾಡಿ: 

ನೋಡಿ ಮೊದಲು ಪಡಿತರ ಪಾವತಿ ಸಮಸ್ಯೆ ಎಂದರೆ ತಿಳಿದುಕೊಳ್ಳಿ 

  1. ಬಯೋಮೆಟ್ರಿಕ್ ಅಂದರೆ ಹೆಬ್ಬಟ್ಟು ಕೊಟ್ಟು ನೀವು ರೇಷನ್ ತರುತ್ತೀರಲ್ಲವೇ ಇಂತಹ ಸಂದರ್ಭದಲ್ಲಿ ತೊಂದರೆಯಾದಾಗ. 
  2. ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಸರಿಯಾಗಿ ಆಗದೆ ಇದ್ದಾಗ.

ಈ ಮೇಲ್ಗಡೆ ತಿಳಿಸಿರುವ ಹಾಗೆ ಯಾವುದೇ ತೊಂದರೆ ಆಗಲಿ ಈ ಕೆಳಗಿನ ಅಧಿಕಾರಿಗಳನ್ನು ಅಥವಾ ದೂರವಣಿಗೆ ಕರೆ ಮಾಡಬಹುದು.

  1. ಅಹಾರ ಇಲಾಖೆ ಗ್ರೀವಾನ್ಸ್ ಸೆಲ್: 1967
  2. ಸ್ಥಳೀಯ ಪಡಿತರ ಕಚೇರಿಗೆ ಭೇಟಿ ನೀಡಿ
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!