ಕರ್ನಾಟಕದಲ್ಲಿ ಮಾರ್ಚ್ 22 ರಂದು ರಾಜ್ಯವ್ಯಾಪಿ ಬಂದ್ ಘೋಷಿಸಲಾಗಿದೆ. ಹೌದು ಯಾಕೆ ಎಂದು ನಿಮಗೂ ತಿಳಿದಿಲ್ಲವೇ ಹಾಗಿದ್ದರೆ ತಿಳಿಯಿರಿ ಬೆಳಗಾವಿಯಲ್ಲಿ ಮರಾಠಿ ಗುಂಪುಗಳು KSRTC ನೌಕರರ ಮೇಲೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಸಂಘಟನೆಗಳಾದ ಪ್ರೊ-ಕನ್ನಡ, ವಿಶೇಷವಾಗಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ, ಈ ಬಂದ್ ಅನ್ನು ಕರೆ ನೀಡಿದೆ.
ಬಂದ್ ಗೆ ಕಾರಣ ಮತ್ತು ಪ್ರಮುಖ ಬೇಡಿಕೆಗಳು ಇದೆ:

ಈ ಪ್ರತಿಭಟನೆಯ ಹಿಂದಿನ ಮುಖ್ಯ ಕಾರಣವೆಂದರೆ, KSRTC ಬಸ್ ಚಾಲಕರು ಹಾಗೂ ನಿರ್ವಾಹಕರ ಮುಖಕ್ಕೆ ಶಾಯಿಯನ್ನೆರೆದು ಅಷ್ಟೇ ಅಲ್ಲದೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಖಂಡಿಸಿ ಕನ್ನಡ ಹೋರಾಟಗಾರರು ಸರ್ಕಾರವನ್ನು ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
KSRTC ಮತ್ತು BMTC ನೌಕರರ ಬೆಂಬಲ
KSRTC ಮತ್ತು BMTC ನೌಕರರ ಸಂಘಗಳು ಕರ್ನಾಟಕ ಬಂದ್ ಬೆಂಬಲ ವ್ಯಕ್ತಪಡಿಸಿರುವುದರಿಂದ, ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ KSRTC ಮತ್ತು BMTC ನೌಕರರ ಸಂಘದ ಅಧ್ಯಕ್ಷ ಚಂದ್ರು, “ಇಂತಹ ಘಟನೆಗಳು ಮರುಕಳಿಸಬಾರದು. ನಾವು ಪ್ರೊ-ಕನ್ನಡ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ,” ಎಂದು ತಿಳಿಸಿದ್ದಾರೆ ಇದರ ಕುರಿತು ನಿಮ್ಮ ಅನಿಸಿಕೆ ಏನೆಂಬುವುದು ಕಾಮೆಂಟ್ ಮಾಡಿ.
ಮೆಟ್ರೋ ಸೇವೆ ಬಂದ್ ಆಗುತ್ತಾ.?
ಬೆಂಗಳೂರಿನಲ್ಲಿ ಮೆಟ್ರೋ ಸೇವೆಗಳು ಬಂದ್ ಆಗುತ್ತವೆಯೇ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತೆ ನೋಡಿ ಇದರ ಕುರಿತು ಇನ್ನೂ ಅಧಿಕೃತವಾಗಿ ಘೋಷಣೆ ಬಂದಿಲ್ಲ. ಆದ್ದರಿಂದ ಪ್ರಯಾಣಿಕರು ನಿಮ್ಮ ಪ್ರಯಾಣಕ್ಕೆ ಸಿದ್ಧಪಡಿಸಿಕೊಳ್ಳಿ ಇದರ ಕುರಿತು ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ.
ಮಾರ್ಚ್ 22 ಬಂದ್ ದಿನದಲ್ಲಿ ಜನತೆಗೆ ಸಲಹೆಗಳು:
- KSRTC ಮತ್ತು BMTC ಬಸ್ ಸೇವೆಗಳು ಸ್ಥಗಿತಗೊಳ್ಳಬಹುದು ಆದ್ದರಿಂದ ನೀವು ಬೇರೆ ಪ್ರಯಾಣ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಎಮರ್ಜೆನ್ಸಿ ಇದ್ದರೆ.
- ಪ್ರಮುಖ ಹೈವೇ ಮತ್ತು ನಗರ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
- ಖಾಸಗಿ ವಾಹನಗಳ ಸಂಚಾರದಲ್ಲಿ ಕೆಲವೊಂದು ವ್ಯತ್ಯಾಸಗಳು ಆಗಬಹುದು ಆದರೆ ಮೆಡಿಕಲ್ ಮತ್ತು ತುರ್ತು ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.
ದಯವಿಟ್ಟು ಗಮನಿಸಿ ಪ್ರಯಾಣಿಕರು ಮತ್ತು ನಾಗರಿಕರು ಮುನ್ನೆಚ್ಚರಿಕೆ ವಹಿಸಿ, ಬಂದ್ ದಿನದಲ್ಲಿ ತಮ್ಮ ದಿನನಿತ್ಯದ ಕೆಲಸಗಳನ್ನು ಸರಿಯಾಗಿ ಮಾಡುವುದು ಉತ್ತಮ ಆಗಿರುತ್ತೆ.